Duration 6:58

Yamuna Murthy

8 138 watched
0
105
Published 14 Oct 2019

ಕನ್ನಡದ ಮೊಟ್ಟ ಮೊದಲ ಹವ್ಯಾಸಿ ನಟಿ ಎಂಬ ಹೆಮ್ಮೆಗೆ ಪಾತ್ರರಾದವರು ಶ್ರೀಮತಿ ಯಮುನಾ ಮೂರ್ತಿಯವರು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧ ಹೆಸರು. ಬೆಂಗಳೂರು ಆಕಾಶವಾಣಿಯಲ್ಲಿ ಹಿರಿಯ ಕಲಾವಿದೆಯಾಗಿ ರುವ ಜೊತೆಗೆ, ನಾಟ್ಯ ರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ, ಹೀಗೆ ಯುಮುನಾ ಮೂರ್ತಿ ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿಯದು. ತಮ್ಮ ೧೨ನೇ ವಯಸ್ಸಿನಲ್ಲಿ "‘ಛಾಯಾ ಕಲಾವಿದರು’" ಎಂಬ ಹವ್ಯಾಸಿ ರಂಗತಂಡದ ಕಲಾವಿದೆಯಾಗಿ, ಹಾಗೂ ಕನ್ನಡ ಹವ್ಯಾಸಿ ರಂಗಭೂಮಿಯ ಮೊದಲ ನಟಿಯಾಗಿ ಪರ್ವತವಾಣಿ ವಿರಚಿತ "ಬಹದ್ದೂರ್ ಗಂಡು’" ನಾಟಕದ ನಾಯಕಿಯಾಗಿ ೧೫೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಯಮುನಾಮೂರ್ತಿಯವರು ೧೯೬೩ರಲ್ಲಿ ಬೆಂಗಳೂರು ಆಕಾಶವಾಣಿ ನಾಟಕ ಕಲಾವಿದೆಯಾಗಿ ೨೩ ವರ್ಷ ಧಾರವಾಡದಲ್ಲಿ, ೫ ವರ್ಷ ಬೆಂಗಳೂರು ಆಕಾಶವಾಣಿಯ ನಾಟಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿ, ೧೯೯೧ರಲ್ಲಿ ಆಕಾಶವಾಣಿ ಸಹಾಯಕ ಕೇಂದ್ರದ ನಿರ್ದೇಶಕಯಾಗಿ ನಿವೃತ್ತಿ ಹೊಂದಿದರು. ಈ ಅವಧಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ನಾಟಕಗಳನ್ನು ಪ್ರಸ್ತುತಪಡಿಸಿ, ಅರವತ್ತು ನಾಟಕಗಳನ್ನು ರಚಿಸಿ, ವೈವಿಧ್ಯಮಯ ಪಾತ್ರಗಳಲ್ಲಿಅಭಿನಯಿಸಿದ್ದಾರೆ. ಆರು ಬಾರಿ "ಅಖಿಲ ಭಾರತ ಆಕಾಶವಾಣಿ ವಾರ್ಷಿಕ ಸ್ಪರ್ಧೆ"ಯಲ್ಲಿ ಭಾಗವಹಿಸಿ, ಉತ್ತಮ ನಿರ್ದೇಶಕಿ ಎಂಬ ಪ್ರಶಸ್ತಿ ಪಡೆದಿದ್ದಾರೆ. ನಿವೃತ್ತಿಯ ನಂತರ ರಂಗ ನಾಟಕ, ಬಾನುಲಿ ನಾಟಕಗಳಲ್ಲದೆ, "ಯಾಮಿನೀ ಕ್ರಿಯೇಶನ್ಸ್" ಎಂಬ ಸಂಸ್ಥೆ ಸ್ಥಾಪಿಸಿ, ದೂರದರ್ಶನಕ್ಕಾಗಿ ಹಲವು ನಾಟಕಗಳನ್ನು ಪ್ರಸ್ತುತಪಡಿಸಿದ್ದಾರೆ. ೧೦ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಯಮುನಾ ಮೂರ್ತಿಯವರ "ಲಠ್ಠಣಿಗೆ ಪುರಾಣ" ಎಂಬ ಲಘುಬರಹ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ. ಬಾನುಲಿ ಬರಹ, ಅಭಿನಯ ಮತ್ತು ನಿರೂಪಣಾ ಶಿಬಿರಗಳಲ್ಲಿ ಯಮುನಾ ಮೂರ್ತಿಯವರ ವಿದ್ವತ್‍ಪೂರ್ಣ ಭಾಷಣಗಳು ಎಲ್ಲರ ಮೆಚ್ಚುಗೆ ಪಡೆದಿವೆ. ಮಕ್ಕಳಿಗೆ ಕಥೆ ಹೇಳುವುದು, ಟಿವಿಯ ಹಾಸ್ಯೋತ್ಸವ ಮತ್ತು ಹರಟೆಗಳಲ್ಲಿ ಭಾಗವಹಿಸುವುದು ಸಹ ಇವರ ಕಾರ್ಯಾಭಿರುಚಿಗಳಲ್ಲಿ ಒಂದು.

Category

Show more

Comments - 7